ಮುದ್ದೇಬಿಹಾಳ : ರಂಜಾನ್ ಹಬ್ಬ ಎಲ್ಲ ಹಬ್ಬಗಳ ಜೊತೆಗೆ ಆಚರಣೆಗೆ ಬರುತ್ತದೆ.ನಾವೆಲ್ಲ ಯುದ್ಧವನ್ನು ಖಂಡಿಸಬೇಕು.ವಿಶೇಷವಾಗಿ ರಂಜಾನ್ ತಿಂಗಳಲ್ಲೇ ಈ ಯುದ್ಧ ನಡೆಯಬೇಕಾದ ಅವಶ್ಯಕತೆ ಇರಲಿಲ್ಲ.ಯುದ್ಧ ಕೊನೆಗೊಂಡು ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥನೆ ಮಾಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಉರ್ದು ಶಾಲೆ ಆವರಣದಲ್ಲಿ ಶುಕ್ರವಾರ ದೇವಿಕಾ ಸುಬ್ಬರಾವ್ ಫೌಂಡೇಶನ್ದಿAದ ರಂಜಾನ್ ಹಬ್ಬದ ನಿಮಿತ್ಯ ಆಯೋಜನೆ ಮಾಡಿದ್ದ ಇಫ್ತಿಯಾರ್ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದು ಮಾನವೀಯ ಧರ್ಮವನ್ನು ಸಾರುವ ಹಬ್ಬ ರಂಜಾನ್ ಆಗಿದೆ. ದೇವರ ಸಂಕಲ್ಪದ ಮೇರೆಗೆ ಇಲ್ಲಿ ಇಫ್ತಿಯಾರ್ ಕೂಟ ನಡೆಯುತ್ತಿದೆ.ಇದು ಯಾರ ವಯಕ್ತಿಕವಾಗಿಲ್ಲ ಎಂದು ಹೇಳಿದರು.
ಇಳಕಲ್ ಪ್ರವಚನಕಾರ ಲಾಲ್ಹುಸೇನ್ ಕಂದಗಲ್ ಮಾತನಾಡಿ, ದೇವಭಯ ನಿಮ್ಮಲ್ಲಿ ಬೆಳೆದು ಬರಬೇಕು.ಉಪವಾಸದಿಂದ ದೇವಭಯವನ್ನು ಈ ರಂಜಾನ್ ಮಾಸದಲ್ಲಿ ತಿಳಿಸಿಕೊಡಲಾಗುತ್ತದೆ.ಜಗತ್ತಿನಲ್ಲಿ ಶಾಂತಿ ಸೌಹಾರ್ದತೆ ಬೆಳೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಳಿಕೋಟಿಯ ಮುಸ್ಲಿಂ ಧರ್ಮಗುರು ಶಕೀಲಅಹ್ಮದ ಖಾಜಿ,ಮೌಲಾನಾಗಳು ಇದ್ದರು.ಪಟ್ಟಣದ ಸರ್ವಧರ್ಮೀಯರು ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿದ್ದರು.







