ಮುದ್ದೇಬಿಹಾಳ : ದೇಶವನ್ನು ಆಳುತ್ತಿರುವ ಪ್ರಧಾನ ನರೇಂದ್ರ ಮೋದಿ ಅವರಿಗೆ ಬಡವರು,ಮಧ್ಯಮ ವರ್ಗದವರದ್ದು ಆಲೋಚನೆ ಇಲ್ಲ.ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಇದುವರೆಗೂ ಏನೂ ಮಾಡಿಲ್ಲ.ಸಿಲಿಂಡರ್ ದೊರೆಯದಂತಹ ಪರಿಸ್ಥಿತಿ ತಂದಿಟ್ಟಿದ್ದು ತುರ್ತು ಸ್ಥಿತಿ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಸಚೀನಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎನ್.ಎಸ್.ಯೂ.ಐ., ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ನಿAದ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಇರಾನ್, ರಷ್ಯಾ ಬೆಲೆ ಏರಿಕೆ ಮಾಡಿದರೂ ನಮ್ಮಲ್ಲಿ ಸಿಲಿಂಡರ್ ಸಿಗದೇ ಇರುವ ಪರಿಸ್ಥಿತಿ ತಂದಿಟ್ಟಿದ್ದಾರೆ.ಎರಡು ಸಾವಿರ ರೂ. ಕೊಟ್ಟರೂ ಸಿಲಿಂಡರ್ ಇಂದು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ.ಇವರು ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ.ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತುಕೊಳ್ಳಿ ಎಂದು ಆಗ್ರಹಿಸಿದರು.
ಗ್ಯಾರಂಟಿ ಸಮೀತಿ ಜಿಲ್ಲಾ ಉಪಾಧ್ಯಕ್ಷ ಸದ್ದಾಂ ಕುಂಟೋಜಿ ಮಾತನಾಡಿ, ದೇಶದ ಪ್ರಧಾನ ಮಂತ್ರಿ ನಮ್ಮ ರಾಷ್ಟçದ ಮರ್ಯಾದೆಯನ್ನು ಅಂತರಾಷ್ಟಿçÃಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ.ದೇಶದ ನಾಗರಿಕರಿಗೆ ತಡೆಯಿಲ್ಲದಂತೆ ಸಿಲಿಂಡರ್ ಗ್ಯಾಸ್ ಪೂರೈಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಸಮೀತಿ ಸದಸ್ಯ ಬುಡ್ಡೇಸಾಬ ಚಪ್ಪರಬಂದ ಮಾತನಾಡಿ, ಮೋದಿ ಮೋದಿ ಎಂದು ಜಪಿಸುವ ಬಿಜೆಪಿಯ ಅಂಧ ಭಕ್ತರು ಈಗ ಎಲ್ಲಿದ್ದಾರೆ ? ಮೋದಿ ಮಾಡುತ್ತಿರುವ ಕೆಲಸಗಳನ್ನು ಅವರು ತಿಳಿದುಕೊಳ್ಳಬೇಕು.ಮೋದಿ ಚಹಾ ಮಾರಿದ್ದಾರೋ ಗೊತ್ತಿಲ್ಲ.ಆದರೆ ದೇಶವನ್ನು ಮಾರುವುದಂತೂ ಗ್ಯಾರಂಟಿ ಎಂದು ಟೀಕಿಸಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಕ್ಷತಾ ಚಲವಾದಿ,ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಬಸವರಾಜ ಭಜಂತ್ರಿ, ಮಹ್ಮದರಫೀಕ ಶಿರೋಳ,ರಾಮಣ್ಣ ರಾಜನಾಳ, ರಾಮಣ್ಣ ನಾಯಕಮಕ್ಕಳ,ಲಕ್ಷö್ಮಣ ಲಮಾಣಿ, ಅಬ್ದುಲಸಲಾಂ ಮುಲ್ಲಾ, ಸಮೀರ ದ್ರಾಕ್ಷಿ,ಸುಜಾತಾ ಸಿಂಧೆ, ಮಾಬುಬಿ ಬಾಗವಾನ,ಶೋಭಾ ಶೆಳ್ಳಗಿ, ನೀಲಮ್ಮ ಚಲವಾದಿ,ಕಮಲಾ ಭಜಂತ್ರಿ, ಶಿವಲೀಲಾ ಬಸರಕೋಡ,ಮಮ್ತಾಜ ಮುÄಲ್ಲಾ ಮೊದಲಾದವರು ಇದ್ದರು.ಇದೇ ವೇಳೆ ಖಾಲಿ ಸಿಲಿಂಡರ್ಗಳಿಗೆ ಪೂಜೆ ಸಲ್ಲಿಸಿ ವೃತ್ತದಲ್ಲಿಯೆ ಕಟ್ಟಿಗೆಗಳನ್ನು ಒಲೆಯಲ್ಲಿಟ್ಟು ರೊಟ್ಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.







