ಮುದ್ದೇಬಿಹಾಳ : ನಮ್ಮ ಭಾಗದ ನಾರಾಯಣಪೂರ ಹಾಗೂ ಆಲಮಟ್ಟಿ ಜಲಾಶಯದ ಮಧ್ಯೆದಲ್ಲಿ ಬರುವ ಕೃಷ್ಣಾ ನದಿ ತೀರದಲ್ಲಿ ವ್ಯಾಪಕವಾಗಿ ಮೀನುಗಾರಿಕೆಗೆ ಅವಕಾಶ ಇದ್ದು ಯುವಕರು ಈ ಕ್ಷೇತ್ರದಲ್ಲಿ ತರಬೇತಿ ಪಡೆದುಕೊಂಡರೆ ನಿರುದ್ಯೋಗ,ಬಡತನ ನಿವಾರಣೆ ಮಾಡಲು ಸಾಧ್ಯವಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಶನಿವಾರ ಸನ್ 2025-26ಸಾಲಿನ ಜಿಪಂ ಲಿಂಕ್ ಡಾಕ್ಯುಮೆಂಟ್ ಯೋಜನೆಯಡಿ ಮೀನುಗಾರಿಕಾ ಇಲಾಖೆಯ ನೂತನ ಕಚೇರಿಯ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೀನುಮರಿಗಳ ಉತ್ಪಾದಕ ಜಾಗೆಯನ್ನು ನಾರಾಯಣಪೂರ ಗಡಿ ಭಾಗದ ಸಿದ್ದಾಪುರದಲ್ಲಿ ಗುರುತಿಸಿ 75 ಎಕರ ಜಮಿನು ಸ್ವಾಧೀನಗೊಳಿಸಲಾಗಿದೆ.ಆ ಸಮಯದಲ್ಲಿ ಸಿಂಧನೂರ ಶಾಸಕರಾಗಿದ್ದ ವೆಂಕಟರಾವ ನಾಡಗೌಡರ ಮೂಲಕ ಸೀಡ್ ಫಾರ್ಮ್ಗೆ ಒಂಭತ್ತು ಕೋಟಿ ರೂ.ಮಂಜೂರು ಮಾಡಿಸಿದ್ದೇವು.ಅದರ ಅಭಿವೃದ್ಧಿಗೆ ಹಣ ಕೊಟ್ಟಿದ್ದೇವು.ಆದರೆ ಸಮರ್ಪಕ ಕೆಲಸ ಆಗಲಿಲ್ಲ ಎಂದು ಹೇಳಿದರು.
ನಮ್ಮ ಭಾಗದಲ್ಲಿ ಆಂಧ್ರ ಮತ್ತು ತಮಿಳುನಾಡು ಜನ ಮೀನುಗಾರಿಕೆ ಮಾಡುತ್ತಾರೆ.ಅವರನ್ನು ಗುತ್ತಿಗೆದಾರರು ತಂದು ಕೆಲಸಕ್ಕೆ ಹಚ್ಚಿ ಬುಟ್ಟಿ ಕೊಡಿಸುವುದು,ಬಲೆ ಕೊಡಿಸಿ ಕೆಜಿ ಮೀನಿಗೆ 50-60ರೂ. ಕೊಡುತ್ತಿದ್ದರು.ಆದರೆ ಮಾರುಕಟ್ಟೆಯಲ್ಲಿ 250-300 ರೂ ಮಾರಾಟ ಮಾಡುತ್ತಿದ್ದರು.ಮಧ್ಯವರ್ತಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದರು.ನಮ್ಮ ಭಾಗದ ಯಾವುದೇ ಸೊಸೈಟಿಯಲ್ಲಿ ಮೀನುಹಿಡಿಯಲು ಆಸಕ್ತಿ ಕಡಿಮೆ. ಹಿಂದುಳಿದ ಜನಾಂಗ ಇದ್ದಾರೆ.ಎಷ್ಟೊ ಜನಕ್ಕೆ ಭೂಮಿಯಿಲ್ಲ.ಈ ಜಲಾಶಯಗಳು ದೇವರು ಕೊಟ್ಟ ವರದಾನ.ಮೀನುಗಾರಿಕೆ ತರಬೇತಿ ಪಡೆದರೆ ಆರ್ಥಿಕವಾಗಿ ಆದಾಯ ಬರುತ್ತದೆ ಎಂದು ಹೇಳಿದರು.
ಇಲಾಖೆಯ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಮೀನುಗಾರಿಕಾ ಉತ್ಪಾದನಾ ಕೇಂದ್ರ ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಆರಂಭಿಸಲಾಗಿದೆ.ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರದ ಆರಂಭಕ್ಕೆ ಒತ್ತು ನೀಡಲಾಗಿದೆ.ಮೀನುಮರಿಗಳನ್ನು ಉತ್ಪಾದಿಸುವ ಹೊಸಪೇಟೆ, ಶಿವಮೊಗ್ಗ ನಮ್ಮ ರೈತರು ಹೋಗಬೇಕಿತ್ತು.ಆದರೆ ಸಿದ್ದಾಪುರದ ಮೀನುಗಾರಿಕಾ ಉತ್ಪಾದನಾ ಕೇಂದ್ರದಿAದ ಶೇ. 80 ರಷ್ಟು ಮರಿಗಳು ಉಳಿಯುತ್ತವೆ ಎಂದು ಹೇಳಿದರು.
ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಇರ್ಫಾನ್ ಭಾಂಗಿ ಮಾತನಾಡಿ, ಜಿಪಂನಿAದ 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಹೊಸ ಜಾಗೆಯನ್ನು ಶಾಸಕ ಸಿ.ಎಸ್.ನಾಡಗೌಡರು ಕಾಳಜಿಯಿಂದ ನೀಡಿದ್ದಾರೆ.ಕೆ.ಆರ್.ಐ.ಡಿ.ಎಲ್ ಮುಂದುವರೆದ ಕಾಮಗಾರಿ ಎಂದು 50 ಲಕ್ಷ ರೂ.ಗಳನ್ನು ಇಲಾಖೆ ನೀಡಿದೆ ಎಂದು ಹೇಳಿದರಲ್ಲದೇ ವಿಶೇಷ ಘಟಕದ ಯೋಜನೆಯಡಿ ಒಂದು ವಾಹನ ಮೀನುಗಾರರಿಗೆ ಮಂಜೂರಿಯಾಗಿದೆ.ಮೀನುಗಾರರಿಗೆ ಲೈಫ್ ಜಾಕೆಟ್, ಬಲಿ ನೀಡಲಾಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಕಾಂಗ್ರೆಸ್ ಹಿರಿಯ ಮುಖಂಡ ಎಂ.ಬಿ.ನಾವದಗಿ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕೆಪಿಸಿಸಿ ಸದಸ್ಯ ರಮೇಶ ಓಸ್ವಾಲ,ವೀರಶೈವ ಲಿಂಗಾಯತ ಸಮಾಜದ ಮುಖಂಡ ಪ್ರಭುರಾಜ ಕಲ್ಬುರ್ಗಿ , ಉದ್ಯಮಿ ಶರಣು ಸಜ್ಜನ,ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಸತೀಶ ಓಸ್ವಾಲ್, ರಾಜು ಕರಡ್ಡಿ,ಸಂಗನಗೌಡ ಬಿರಾದಾರ, ಡಾ.ವಿಜಯಕುಮಾರ ಗೂಳಿ,ಸದು ಮಠ,ನಾಗರಾಜ ಬಿರಾದಾರ, ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶಗೌಡ ಪಾಟೀಲ ಇಂಗಳಗೇರಿ,ಲಕ್ಷö್ಮಣ ಲಮಾಣಿ ಸೇರಿದಂತೆ ಹಲವರು ಇದ್ದರು.ವಿಶೇಷ ಘಟಕ ಯೋಜನೆಯಡಿ ಗೆದ್ದಲಮರಿಯ ಶಾಂತಾಬಾಯಿ ಲಮಾಣಿ ಅವರಿಗೆ ಮೀನುಗಾರಿಕೆಗಾಗಿ ಗೂಡ್ಸ್ ಕ್ಯಾಬ್ನ್ನು ವಿತರಿಸಲಾಯಿತು.







