ಮುದ್ದೇಬಿಹಾಳ : ಪಟ್ಟಣದ ಬಸ್ ನಿಲ್ದಾಣವೂ ಸೇರಿದಂತೆ ಪಕ್ಕದ ನಿಡಗುಂದಿ, ನಾಲತವಾಡ ಬಸ್ ನಿಲ್ದಾಣಗಳಲ್ಲಿ ಇಲಾಖೆಯ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಎರಡು ದಿನಗಳ ಕಾಲ ಸ್ವಚ್ಛತಾ ಅಭಿಯಾನ (Swachcha Bharath Abhiyan) ಹಮ್ಮಿಕೊಂಡಿರುವುದಾಗಿ ಸಾರಿಗೆ ಘಟಕ ವ್ಯವಸ್ಥಾಪಕ ಅಬೂಬಕರ್ ಮದಭಾವಿ ಹೇಳಿದರು.
Join Our Telegram: https://t.me/dcgkannada
ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ (Swachcha Bharath Abhiyan) ಚಾಲನೆ ನೀಡಿ ಅವರು ಮಾತನಾಡಿದರು.
ಬಸ್ ನಿಲ್ದಾಣ ನಮ್ಮ ಆಸ್ತಿ ಎಂಬುದು ಸಾರ್ವಜನಿಕರು ಅರಿತುಕೊಳ್ಳಬೇಕಿದೆ. ನಿಲ್ದಾಣದ ಕಂಬಗಳಿಗೆ ಎಲ್ಲೆಂದರಲ್ಲಿ ಭಿತ್ತಿಪತ್ರ ಅಂಟಿಸಿ ನಿಲ್ದಾಣದ ಅಂದವನ್ನು ಹಾಳು ಮಾಡುವ ಕೆಲಸ ಆಗಬಾರದು ಎಂದರು.
ಇದನ್ನೂ ಓದಿ: ಅನ್ನದಾತನಿಗೆ ವಾಣಿಜ್ಯ ರತ್ನ ಪ್ರಶಸ್ತಿ ಗರಿ.. ಯುವ ಉದ್ಯಮಿಗೆ ಸಂದ ಗೌರವ
ಯುವ ಮುಖಂಡ ಉದಯ ರಾಯಚೂರ ಮಾತನಾಡಿ, ಸಾರಿಗೆ ಇಲಾಖೆಯ ಸಿಬ್ಬಂದಿಯೇ ಬಸ್ ನಿಲ್ದಾಣದ ಸ್ವಚ್ಛತೆ ಕೈಗೊಂಡಿರುವುದಕ್ಕೆ ಸಾರ್ವಜನಿಕರ ಪರವಾಗಿ ಧನ್ಯವಾದ ಹೇಳುತ್ತೇವೆ.ನಿಲ್ದಾಣಕ್ಕೆ ಬರುವವರು ಎಲ್ಲೆಂದರಲ್ಲಿ ಗುಟ್ಖಾ ಅಗೆದು ಉಗಿಯುವುದು, ಎಲ್ಲೆಂದರಲ್ಲಿ ಬಹಿರ್ದೆಸೆ, ಮೂತ್ರ ವಿಸರ್ಜನೆ ಮಾಡುವುದನ್ನು ಮಾಡಬಾರದು. ನಿಲ್ದಾಣದ ಸ್ವಚ್ಛತೆಗೆ ಯುವಕರು ಕೈಜೋಡಿಸಬೇಕು ಎಂದರು.
ಘಟಕದ ಎಡಿಎಂ ಸೂಪರವೈಸರ್ ಎಸ್.ಬಿ.ಪಾಟೀಲ್, ಎನ್.ಎಸ್.ಮಠ, ಬಸವರಾಜ ಬಿರಾದಾರ,ಎಸ್.ಡಿ.ಪತ್ತಾರ, ಎಸ್.ಎಂ.ಹೊಳಿ, ಎಸ್.ಆರ್.ಮುಲ್ಲಾ ಹಾಗೂ ಆಡಳಿತ ವರ್ಗ, ತಾಂತ್ರಿಕ ಸಿಬ್ಬಂದಿ, ಚಾಲಕ ನಿರ್ವಾಹಕ, ಸಿಬ್ಬಂದಿ ಪಾಲ್ಗೊಂಡಿದ್ದರು.